Wednesday, January 9, 2008

ಚಿನ್ನ-ಚೆಲುವಿ

ಸಾಲಂಕೃತರಾದ ಚೆಲುವಮ್ಮ,ಚಿನ್ನಮ್ಮ ಇಬ್ಬರನ್ನೂ ತನ್ನ ಅಣ್ಣ ಹಸೆಗೆ ಕರೆತಂದಾಗ ಸೀತಮ್ಮನ ಕಣ್ತುಂಬಿ ಬಂದಿತು ಅವರು ಎಷ್ಟು ಗದ್ಗದಿತರಾದರೆಂದರೆ ಅವರ ಅತ್ತೆ ವೆಂಕಮ್ಮನವರು `ಸೀತಾ ಆ ಹರಿವಾಣ ಇತ್ತಕೊಡು...' ಎಂದು ಮೂರನೇ
ಬಾರಿ ಕೇಳಿ ಕೊನೆಗೆ ಅವರನ್ನು ಒಮ್ಮೆ ತಿವಿದಾಗಲೇ ಈ ಪ್ರಪಂಚಕ್ಕೆ ಅವರು ಬಂದಿದ್ದು.ಅವರಿಗೆ ತಮ್ಮ ಮದುವೆಯೇ ನೆನ್ನೆ ಮೊನ್ನೆ ನಡೆದಂತೆ ನೆನಪಿದೆ ಮದುವೆಯಾದ ವರುಷದಲ್ಲೇ ಚಿನ್ನಮ್ಮ ಹುಟ್ಟಿದ್ದಳು ಮರು ವರುಷ ಚೆಲುವಮ್ಮ...ಚಿನ್ನಳಿಗೆ
ಮೊದಲಿಂದಾ ಆರೋಗ್ಯ ಕಡಿಮೆ ಎಷ್ಟೆಷ್ಟು ಏನೇನು ತಿನ್ನಿಸಿ ಮಾಡಿದರೂ ಪೀಚಾಗೇ ಇದ್ದಾಳೆ ಸದ್ಯ ಹುಡುಕಲು ಸ್ವಲ್ಪ ಕಷ್ಟವಾದರೂ ಚಿನ್ನನಿಗೆ ಒಳ್ಳೇ ಮನೆಯೇ ಸಿಕ್ಕಿತಲ್ಲಾ...ಸೀತಮ್ಮ ಉಸಿರೆಳೆದರು ಚೆಲುವಿಯ ಬಗ್ಗೆ ಅವರಿಗೆ ಯೋಚನೆಯೇ ಇಲ್ಲ
ಹುಟ್ಟುತ್ತಲೇ ಗುಂಡು ಗುಂಡಾದ ಕೆಂಪು ಮಗು ಅವಳು. ನೋಡಿದವರೆಲ್ಲಾ ಎಂಥಾ ಚೆಲುವಿನ ಮಗು ಎಂದು ಉದ್ಗಾರ ಎಳೆದು ಕೊನೆಗೆ ಅವಳ ಹೆಸರು ಚೆಲುವಮ್ಮ ಎಂದೇ ಆಗಿಹೋಗಿತ್ತು ಚಿನ್ನನಿಗೆ ಸೀತಮ್ಮನ ಮಾವನವರ ತಾಯಿ ಹೆಸರು ಇಟ್ಟಿದ್ದು
ಮೂರನೆಯವ ವೆಂಕಟೇಶನಿಗೆ ಮನೆದೇವರ ಹೆಸರು...ಪುರೋಹಿತರು ಗಟ್ಟಿ ಮೇಳ...ಗಟ್ಟಿ ಮೇಳ...ಎಂದು ಜೋರು ದನಿಯಲ್ಲಿ ಕೂಗುತ್ತಲೂ ಗಟ್ಟಿ ಮೇಳ ಭೋರ್ಗರೆದು ಅಕ್ಷತೆ ಕಾಳುಗಳ ಮಳೆ ಸುರಿದು ಚಿನ್ನ,ಚೆಲುವಿ ಇಬ್ಬರೂ ಸೌಭಾಗ್ಯವತಿಯರಾದರು


ಶ್ರೀನಿವಾಸನ ಪಕ್ಕದಲ್ಲಿ ಕೂತ ಚಿನ್ನ ಸ್ವಲ್ಪ ಸುಸ್ತಾದಂತೆ ಕಂಡಳು ಅವಳಿಗೆ ಒಂದಿಷ್ಟು ಕಲ್ಲು ಸಕ್ಕರೆ ಬೆರೆಸಿದ ಹಾಲು ತಂದು ಕೊಡಲು ನಾದಿನಿಗೆ ಹೇಳಿ ಅತ್ತ ತಿರುಗಿದವರಿಗೆ ಚೆಲುವಿಯ ಕೈಯಲ್ಲಿ ಗೋಲಿ ಕಂಡು ಕೆಂಡಾ ಮಂಡಲ ಕೋಪ ಬಂತು ಗೋಲಿ ಕೆಳಗೆ ಹಾಕು ಎಂದು ದೊಡ್ಡ ಕಣ್ಣು ಬಿಟ್ಟು ಹೆದರಿಸಿದರು ಅವಳು ಕೇಳಿದರೆ ತಾನೇ...? ಒಂದು ಕೈನಿಂದ ಅರಿಸಿನ ದಾರದಲ್ಲಿದ್ದ ಹೊಸ ತಾಳಿ ಮುಟ್ಟಿಕೊಳ್ಳುತ್ತಾ ಗೋಲಿಯನ್ನು ಇನ್ನೊಂದು ಮುಷ್ಟಿಯಲ್ಲಿ ಬಿಗಿಯಾಗಿ ಮುಚ್ಚಿಕೊಂಡಳು! ಪುರೋಹಿತರುಇಗೋ...ಈ ಹೂ ಹಿಡಿ...' ಅಂತ ಒಂದಿಷ್ಟು ಹೂ ಕೊಟ್ಟಾಗ ಗೋಲಿ ಚೆಲುವಿಯ ಮಡಿಲು ಸೇರಿತು ಮತ್ಯಾಕೋ ಸರಿ ಬರಲಿಲ್ಲ ಎಂದುಕೊಂಡು ಪುರೋಹಿತರು ಕೊಟ್ಟ ಅಷ್ಟೂ ಹೂ ಒಂದು ಕೈಯಲ್ಲಿ ಕಿವಿಚಿ ಹಿಡಿದು ಅತ್ತಿತ್ತ ನೋಡಿ ಕಲಶದ ದಿಕ್ಕಿನಲ್ಲಿ ಎಸೆದು ಬಿಟ್ಟು ಇನ್ನೊಂದು ಕೈನಿಂದ ಗೋಲಿಯನ್ನು ಬಾಯೊಳಗೆ ಸೇರಿಸಿಕೊಂಡು ಕೆನ್ನೆಯೊಳಗೆ ಒತ್ತರಿಸಿ ಕೊಂಡಳು ಮಗಳ ಈ ಅವಾಂತರವನ್ನು ಕೊನೆಗಣ್ಣಿನಲ್ಲಿ ನೋಡುತ್ತಿದ್ದ ಸೀತಮ್ಮ ಹಣೆ ಹಣೆ ಚಚ್ಚಿಕೊಂಡರು

ಅಂತೂ ಅವತ್ತಿಗೆ ನಿಗದಿಯಾದ ಕಾರ್ಯಕ್ರಮ ಮುಗಿಯಿತು ಆಗಲೇ ಎಲೆ ಹಾಕಲು ಶುರು ಮಾಡಿದ್ದರು.ಬೀಗರೆಲ್ಲರನ್ನೂ ಆಹ್ವಾನಿಸಲೆಂದು ಸೀತಮ್ಮ ಕುಂಕುಮ ಅಕ್ಷತೆಯೊಂದಿಗೆ ಹೊರಟರು.

4 comments:

ಸುಪ್ತದೀಪ್ತಿ suptadeepti said...

ಇದೇನು ಗೊಂಬೆಗಳಂತಿರುವ ಬಾಲೆಯರ ಮದುವೆಯಂತಿದೆ? ಸರಿಯಾಗಿ ಅರ್ಥವಾಗಲಿಲ್ಲ... ಅಥವಾ ನನಗೆ ನಿದ್ರೆ ಬರ್ತಿದೆ!!

nishu mane said...

innoo munduvareyuva katheya?

sunaath said...

ಬಾಲವಿವಾಹದ ಕತೆಯೆ ಇದು?

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ